ಜೂನ್ 15 ಸಿದ್ದಾಪುರದಲ್ಲಿ ಯಕ್ಷ ವೈಭವ-ಅಭಿನಂದನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಜೂನ್ 12 , 2016
|
ಜೂನ್ 12 , 2016
|
ಜೂನ್ 15 ಸಿದ್ದಾಪುರದಲ್ಲಿ ಯಕ್ಷ ವೈಭವ-ಅಭಿನಂದನೆ
ಸಿದ್ದಾಪುರ :
ಶ್ರೀ ಮಂದಾರ್ತಿ ಮೇಳದ ಕಲಾವಿದರಾದ ಆಜ್ರಿ ಉದಯ ಶೆಟ್ಟಿ ಮತ್ತು ಮೂರೂರು ರಮಾಕಾಂತ ಮಡಿವಾಳರ ಸಂಯ್ಯೋಜನೆಯಲ್ಲಿ ಸಿದ್ದಾಪುರದ ರಂಗನಾಥ ಸಬಾಂಗಣದಲ್ಲಿ ಇದೇ ಜೂನ್ ೧೫ ಬುಧವಾರ ಮಳೆಗಾಲದ ಅದ್ದೂರಿಯ ಯಕ್ಷಗಾನ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಗೆ ನೂತನವಾಗಿ ಆಯ್ಕೆಗೊಂಡ ಹಾಲಾಡಿ ತಾರಾನಾಥ ಶೆಟ್ಟಿ ಮತ್ತು ತಾಲೂಕು ಪಂಚಾಯತ್ ಗೆ ಆಯ್ಕೆಗೊಂಡ ವಾಸುದೇವ ಪೈಗಳನ್ನು ವಿದಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಅಭಿನಂದಿಸಲಾಗುವುದು. ಮಣಿಪಾಲಎಂ. ಐ. ಟಿ. ಪ್ರಾದ್ಯಾಪಕ ಎಸ್. ವಿ. ಉದಯಕುಮಾರ ಶೆಟ್ಟಿಯವರು ಅಭಿನಂದನಾ ಬಾಷಣ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ಕಮಲಶಿಲೆ ದೇವಸ್ಥಾನದ ದರ್ಮದರ್ಶಿ ಸಚ್ಚಿದಾನಂದ ಛಾತ್ರ, ಉದ್ಯಮಿ ಕಿರಣ್ ಕೊಡ್ಗಿ. ಡಿ. ಭರಥ್ ಕುಮಾರ್ ಕಾಮತ್, ಕಮಲಶಿಲೆ ನಾರಾಯಣ ಶೆಟ್ಟಿ, ಮುಂತಾದವರು ಬಾಗವಹಿಸಲಿರುವರು. ಬಳಿಕ ಖ್ಯಾತ ಕಲಾವಿದರಿಂದ ಲಂಕಾದಹನ ಎಂಬ ಯಕ್ಷಗಾನ ನೆರವೇರಲಿದೆ. ವಿಶೇಷ ಆಕರ್ಷಣೆಯಾಗಿ 20 ವರ್ಷಗಳ ನಂತರ ಹಿರಿಯ ಕಲಾವಿದ ಎಂ. ಎ. ನಾಯ್ಕರು ಸೀತೆಯಾಗಿ, ಖ್ಯಾತ ಸ್ತ್ರೀ ವೇಷಧಾರಿ ಶಶಿಕಾಂತಶೆಟ್ಟಿ ಹನುಮಂತನಾಗಿ, ಪ್ರಸನ್ನ ಶೆಟ್ಟಿಗಾರ್ ಸುಂದರ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಪ್ರದಾಯದ ಹಿರಿಯ ಭಾಗವತ ನಾಗೇಶ ಕುಲಾಲ್ ಬಳಗದವರ ಹಿಮ್ಮೇಳವಿದೆ ಎಂದು ಸಂಘಟಕರು ತಿಳಿಸಿದ್ದಾರೆ
|
|
|